ಮುಗಿಲಿಗೆ ದಿಗಿಲು ಬಡಿದಿದೆ

ಚಂದ್ರ ಅಣಕಿಸುವಾಗ
ನಾವು ಹೀಗೆ ಕಣ್ಣಲ್ಲಿ ಕಣ್ಣ ಬೆರೆಸಿಯೂ
ಬಾಹುಗಳ ಬಂಧಿಸಿ ಬಿಗಿ
ಹಮ್ಮಿನಲಿ ಕುಳಿತುಕೊಳ್ಳುವುದು
ಸರಿಯೆಂದೇನು ಅನಿಸುತ್ತಿಲ್ಲ

ಚಳಿಹೊದ್ದ ರಾತ್ರಿಯಲಿ
ಎದುರಿಗೆ ಬೆಂಕಿಕಾಯಿಸುತ್ತ
ಎದುರು ಬದರು ಕುಳಿತು ಕೊಳ್ಳುವ ಬದಲು
ಮೈಗೆ ಮೈತಾಗಿಸಿ ಕೂಡ್ರಬಹುದಿತ್ತು
ಯಾವುದೋ ಸಂಪ್ರದಾಯಕೆ ಬೆಚ್ಚಿಬಿದ್ದದ್ದು ಸರಿಯಲ್ಲ

ಆ ರಾತ್ರಿಯಲ್ಲಿ ಮರದ ಆಸರೆ ಪಡೆದ ಹಕ್ಕಿಗಳು ಪ್ರಣಯಿಸುತ್ತಿರುವಾಗ
ಮನುಷ್ಯರಾದ ನಾವು
ಬಯಲ ಆಲಯದಲ್ಲಿ
ಅಹಂ ಹೊತ್ತು ಬೆರೆಯದೇ ಹೋದುದು ಸರಿಯೆನಿಸಲಿಲ್ಲ

ಹತ್ತಿರವಿದ್ದೂ ಎದುರಾದಾಗ
ನಾವು ಬಾಚಿತಬ್ಬಿಕೊಳ್ಳದೇ
ಪ್ರೇಮದ ಕನಸುಗಳ ಬಗೆಗೆ
ತುಟಿ ಬಿಚ್ಚದೇ ಹೋದುದ ಕಂಡು
ಮುಗಿಲಿಗೆ ದಿಗಿಲು ಬಡಿಯುವಂತೆ ಮಾಡಿದ್ದು
ಅಷ್ಟು ಸರಿಯಾದ ಕ್ರಮವಾಗಿರಲಿಲ್ಲ

ಜಾರುವ ಯೌವ್ವನವ ಕಟ್ಟಿಹಿಡಿಯಲಾಗದು
ಮೂರ್ಖ ಬಂಧನಗಳ ಮುರಿಯದೇ
ಕಾಲ ಕಳೆದುದು ಸರಿಯಾದ ನಿರ್ಧಾರವಾಗಿರಲಿಲ್ಲ

ಚಂದ್ರ ಚಂದ್ರಮ ಚಕೋರಿಯೇ
ನದಿಯಾಗುವ ಕಡಲಾಗುವ
ದಂಡೆಯಲ್ಲಿ ಕನಸಿನ ಗೂಡು ಕಟ್ಟುವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೆಂಡರ್
Next post ಮೊದಮೊದಲು

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys